Oplus_131072

ಮಾಡಬೂಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹನುಮಂತರಾಯ ಯಳ್ಳಮಲಗಿ, ಉಪಾಧ್ಯಕ್ಷರಾಗಿ ಕಲ್ಯಾಣರಾವ್ ಮುತ್ತಿಗಿ ಅವಿರೋಧ ಆಯ್ಕೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಮಾಡಬೂಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹನುಮಂತರಾಯ ಯಳ್ಳಮಲಗಿ ಹಾಗೂ ಉಪಾಧ್ಯಕ್ಷರಾಗಿ ಕಲ್ಯಾಣರಾವ್ ಮುತ್ತಿಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರೀಯಾ ಚವ್ಹಾಣ ಘೋಷಿಸಿದ್ದಾರೆ.

ನಿರ್ದೇಶಕರಾದ ಅಣ್ಣರಾಯ ಪೂಜಾರಿ, ಉಮೇಶ್ ಮುತ್ತಿಗಿ, ನಾಗಣ್ಣ ಕರಬಸಪ್ಪ, ಮಲ್ಲಿಕಾರ್ಜುನ್ ದ್ಯಾಮ, ಕಸ್ತೂರಿಬಾಯಿ ಹಳ್ಳದ, ಪೂಜಾ ಸಂಗಣ್ಣ, ಭೀಮರಾಯ ತಳವಾರ್, ಇಕ್ಬಲ್ ಪಟೇಲ್, ಧರ್ಮು ಪವಾರ್, ಚಂದ್ರಶಾ ಸುಬೇದಾರ್ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲಣ್ಣಗೌಡ ಪೊಲೀಸ್ ಪಾಟೀಲ್, ಚನ್ನಬಸಪ್ಪ ಬಿರಾದಾರ್, ಅಂಬಾರಾಯ ಕುಲಕರ್ಣಿ, ನಾಗರಾಜ್ ಮುತ್ತಿಗಿ, ಕಾಶಿರಾಯ ದಿಗ್ಗಾಂವ್, ಈಶ್ವರ್ ತಳಕೇರಿ, ಸೈದಪ್ಪ ಮ್ಯಾಕೇರಿ ಸೇರಿದಂತೆ ಇತರರು. ಫಲಿತಾಂಶ ಹೊರಬೀಳುತ್ತಿದ್ದಂತೆ ಬೆಂಬಲಿಗರು, ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!