ಖ್ಯಾತ ವೈದ್ಯ ಡಾ.ಜೋಶಿ ಅವರಿಗೆ ನಾಗರಿಕರ ವತಿಯಿಂದ ಗೌರವ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಐತಿಹಾಸಿಕ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸೂಫಿ ಸಂತ ಹಜರತ್ ಚಿತ್ತಾಶಹಾವಲಿ ಉರುಸ್ ನಿಮಿತ್ತ ದರ್ಗಾಕ್ಕೆ ಭೇಟಿ ನೀಡಿದ ನಿವೃತ್ತ ಖ್ಯಾತ ವೈದ್ಯ ಡಾ.ಬಿ.ಎನ್.ಜೋಶಿ ಅವರನ್ನು ಚಿತ್ತಾಪುರ ನಾಗರಿಕರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುತ್ತುವಲ್ಲಿ ಮಿನಾಜುದ್ದೀನ್ ಚಿಸ್ತಿ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸುರಕರ್, ಪುರಸಭೆ ಮಾಜಿ ಸದಸ್ಯರಾರ ಸುರೇಶ್ ಅಳ್ಳೋಳ್ಳಿ, ಪ್ರಕಾಶ್ ಜೈಗುರು, ಭಗವಂತ ಕಟಗೆ, ಮುಖಂಡರಾದ ಸೈಯದ್ ಸೇಠ್, ಭೀಮರಾಯ ಹೊತಿನಮಡಿ, ಸಂಗಣ್ಣಗೌಡ ಸಂಕನೂರ, ರವಿಸಾಗರ ಹೊಸಮನಿ, ಸಮೀರ್ ಚಿಸ್ತಿ, ಸಚೀನ್ ಗಂಗಾಣಿ, ಮರೆಪ್ಪ ಸಂದ್ಯಾನ್, ಶಿವುಕುಮಾರ ಅಳ್ಳೋಳ್ಳಿ, ಹಣಮಂತ ಕಲ್ಲಕ್ ಸೇರಿದಂತೆ ಇತರರು ಇದ್ದರು.

