Oplus_131072

ಚಿಕ್ಕ ವಯಸ್ಸಿನಲ್ಲೇ ಪಿಎಸ್‌ಐ ಆನಂದ ಕಾಶಿ ಅವರಿಗೆ ರಾಜ್ಯಪಾಲರಿಂದ ಪ್ರಶಂಸಾ ಪತ್ರ ಲಭಿಸಿದ್ದು ಚಿತ್ತಾಪುರ ಕೀರ್ತಿ ಹೆಚ್ಚಿಸಿದೆ: ಚಿಂಚನಸೂರ

ನಾಗಾವಿ ಎಕ್ಸಪ್ರೆಸ್‌

ಚಿತ್ತಾಪುರ: ಬೆಂಗಳೂರು ನಗರದ ವಿಧಾನಸೌಧ ಪೊಲೀಸ್ ಠಾಣೆಯ ಪಿಎಸ್‌ಐ ಆನಂದ ಕಾಶಿ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಪ್ರಶಂಸಾ ಪತ್ರ ಲಭಿಸಿದ್ದು ನಾಗಾವಿ ನಾಡಿನ ಚಿತ್ತಾಪುರ ಕೀರ್ತಿ ಹೆಚ್ಚಿಸಿದೆ ಎಂದು ಖ್ಯಾತ ಉದ್ಯಮಿದಾರರು ಹಾಗೂ ಶ್ರೀ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅಮರೇಶ್ವರಿ ಬಾಬುರಾವ್ ಚಿಂಚನಸೂರ ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳು ಸಲ್ಲಿಸಿದ್ದಾರೆ.

ಚಿತ್ತಾಪುರ ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಚಂದ್ರಶೇಖರ ಕಾಶಿ ಅವರ ಪುತ್ರ ಆನಂದ ಕಾಶಿ ಪಿಎಸ್‌ಐ ಆಗಿ ರಾಜಭವನಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಗೌರವಾನ್ವಿತ ರಾಜ್ಯಪಾಲರರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಶಂಸಾ ಪತ್ರ ನೀಡಿದ್ದು ಅಭಿನಂದನಾರ್ಹ ಹಾಗೂ ಹರ್ಷವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.

ರಾಜಭವನಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಹಾಗೂ ಮಾಡಿದ ಪ್ರಯತ್ನಗಳು ಮತ್ತು ಕೆಲಸಗಳಿಗೆ ರಾಜ್ಯಪಾಲರು ಮೆಚ್ಚುಗೆಯನ್ನು ದಾಖಲಿಸಿದ್ದಾರೆ ಇದು ಪ್ರಶಂಸನೀಯ ಎಂದು ಹೇಳಿದ್ದಾರೆ.

ಎಲ್ಲಾ ಪ್ರಯತ್ನಗಳಲ್ಲಿ ಉತ್ತಮವಾಗಿರಲು ನಾನು ಬಯಸುತ್ತೇನೆ ಮತ್ತು ಭವಿಷ್ಯವು ನಿಮಗಾಗಿ ಹೆಚ್ಚಿನ ಪ್ರಶಸ್ತಿಗಳು ಲಭಿಸಲಿ ಹಾಗೂ ನಿಮಗೆ ಅದೃಷ್ಟ ಮತ್ತು ಸಮೃದ್ಧಿ ದೊರೆಯಲಿ ಎಂದು ಪ್ರಶಂಸಾ ಪತ್ರದ ಮೂಲಕ ಗೌರವಾನ್ವಿತ ರಾಜ್ಯಪಾಲರು ಶುಭ ಹಾರೈಸಿರುವುದು ಮೆಚ್ಚುವಂಥದ್ದು ಎಂದು ತಿಳಿಸಿದ್ದಾರೆ.

ಆನಂದ ಕಾಶಿ ಅವರು ಚಿಕ್ಕ ವಯಸ್ಸಿನಲ್ಲೇ ಪಿಎಸ್ಐ ಆಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಇನ್ನೂ ಹೆಚ್ಚಿನ ಗೌರವ ಸನ್ಮಾನ ಹಾಗೂ ಪ್ರಶಸ್ತಿಗಳು ಲಭಿಸಲಿ ಎಂದು ಅಮರೇಶ್ವರಿ ಚಿಂಚನಸೂರ ಹಾರೈಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!