Oplus_0

ತಹಸೀಲ್ದಾರ್, ಅಬಕಾರಿ ಉಪ ನಿರೀಕ್ಷಕರಿಗೆ ಮನವಿ | ಭಾಗೋಡಿ ಗ್ರಾಮದಲ್ಲಿ ಮದ್ಯ ಮಾರಾಟ ಹಾಗೂ ಜೂಜಾಟ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಗ್ರಾಮಸ್ಥರ ಆಗ್ರಹ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ಭಾಗೋಡಿ ಗ್ರಾಮದಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೆ ಕಿರಾಣಿ ಅಂಗಡಿ, ಪಾನಶಾಪ್, ಹೋಟೆಲ್ ಹಾಗೂ ಮನೆಯಲ್ಲಿ ಮದ್ಯ ಮಾರಾಟ ಹಾಗೂ ಜೂಜಾಟ ನಡೆಸುತ್ತಿರುವರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಾಗೋಡಿ ಗ್ರಾಮದ ಹಿರಿಯ ಮುಖಂಡ ಡಾ. ಮಹಾಂತಗೌಡ ಪಾಟೀಲ ನೇತೃತ್ವದಲ್ಲಿ ಗ್ರಾಮಸ್ಥರು ಶುಕ್ರವಾರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ಭಾಗೋಡಿ ಗ್ರಾಮದಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಕಿರಾಣ ಅಂಗಡಿ, ಪಾನ್ ಶಾಪ್, ಹೋಟಲ್ ಹಾಗೂ ಮನೆಯಲ್ಲಿ ಮಧ್ಯ ಮಾರಾಟ ಮಾಡುವುದು ಹಾಗೂ ಜೂಜಾಟ (ಇಸ್ಪಿಟ್) ಸಹ ನಡೆಸುತ್ತಿದ್ದಾರೆ. ಇದರಿಂದ ಗ್ರಾಮದ ಚಿಕ್ಕ ಚಿಕ್ಕ ಮಕ್ಕಳು ಕುಡಿತದ ಚಟಕ್ಕೆ ಬಲಿಯಾಗುವ ಸಂಭವ ಹೆಚ್ಚಾಗಿರುತ್ತದೆ. ಮೇಲಾಗಿ ಮಹಿಳೆಯರು ರಸ್ತೆಯಲ್ಲಿ ಕುಡುಕರ ಕಾಟದಿಂದ ತಿರುಗಾಡಲು ಸಹ ಭಯಪಡುತ್ತಿದ್ದಾರೆ. ಕುಡಿತದ ಚಟಕ್ಕೆ ಬಲಿಯಾಗಿ ಜೂಜಾಟ ಮಾಡಿ ಮನೆಯಲ್ಲಿ ಮಹಿಳೆಯರ ಮೇಲೆ ಇರುವ ಒಡವೆಗಳನ್ನು ಮಾರಿ ಕುಟುಂಬ ಬೀದಿಪಾಲಾಗುತ್ತಿವೆ. ಮೇಲಾಗಿ ಮಹಿಳೆಯರಿಗೆ ಕುಡಿದ ಅಮಲಿನಲ್ಲಿ ಬಂದು ಹೊಡೆ ಬಡೆ ಸಹ ಮಾಡುತ್ತಿದ್ದಾರೆ ಎಂದು ಹೇಳಿದರು.

ಕೂಡಲೇ ಆನಧಿಕೃತವಾಗಿ ಕಿರಾಣ ಅಂಗಡಿ, ನಾನಾ ಶಾಪ್, ಹೋಟಲ್ ಹಾಗೂ ಮನೆಗಳಲ್ಲಿ ಮಧ್ಯ ಮಾರಾಟ ಹಾಗೂ ಜುಜಾಟ ನಡೆಸುತ್ತಿರುವವರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಮಧ್ಯ ಮಾರಾಟ ಹಾಗೂ ಜೂಜಾಟ ನಡೆಯದಂತೆ ತಡೆಹಿಡಿಯಬೇಕು ಎಂದು ಆಗ್ರಹಿಸಿದರು.

ಗ್ರಾಮದ ಮುಖಂಡರಾದ ಶರಣಬಸಪ್ಪ ಐನಾಪುರ, ಶರಣಬಸಪ್ಪ ಎಸ್.ಪಾಟೀಲ, ರಾಜೇಂದ್ರಪ್ಪ ಅರಣಕಲ್, ಬಸವರಾಜ ಪಾಟೀಲ ದಳಪತಿ, ದೇವಿಂದ್ರ ನಾಟೀಕಾರ, ದೇವಿಂದ್ರ ಡೋಣಗಾಂವ, ಮುತ್ತಣ್ಣ ಶಿರೂರು, ಮಲ್ಲಿಕಾರ್ಜುನ ಏರಿ, ಜುಲ್ಫೇಕಾರ ಖಾಜಿ, ಗಂಗಾಧರ್ ಬುಳ್ಳಾ, ಬೋಜು ಶೇರಿ, ಅಭಿಷೇಕ್ ಕಲಬುರ್ಗಿ, ಭೀಮು ಕೊಣಿನ್, ವಿಶ್ವನಾಥ ಕಲಬುರ್ಗಿ, ನಾಗುಗೌಡ ರಾಮಪೂರ, ಕಾಶಿನಾಥ ಭಂಗಿ, ಸುರೇಶ್ ಎರಿ, ಚಂದ್ರು ಐನಾಪುರ, ಸಾಬಣ್ಣ ಮುಗುಳನಾಗಾಂವ, ಮಲ್ಲು ಕುಸನೂರ ಸೇರಿದಂತೆ ಇತರರು ಇದ್ದರು. ಇದೇ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಉಪ ನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!