ವಿಶ್ವ ಯೋಗ ದಿನಾಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಕನಸು ಸೇವಾ ಸಂಸ್ಥೆ, ಕಾಯಕ ಸೇವಾ ಸಂಸ್ಥೆ ಮತ್ತು ಸದ್ಗುರು ಶ್ರೀ ಶಿವಶರಣಾನಂದ ಸಂಸ್ಥೆಯ ಸಹಯೋಗದಲ್ಲಿ ಕಲಬುರಗಿ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಒಟ್ಟು 50 ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಕೇದಾರನಾಥ ಕುಲಕರ್ಣಿ, ಶರಣಬಸಪ್ಪ ಕುಂದಗೋಳ, ಸತೀಶ್, ಸಂತೋಷ ಕುಮಾರ್ ಎಸ್.ಪಿ, ಹುಸೇನಿ ಪಾಳಾ, ರಾಚಯ್ಯ ಸ್ವಾಮಿ ಹಿರೇಮಠ, ಯಲ್ಲಪ್ಪಾ, ಜೀವಾ, ಶಶಿ, ಹಣಮಂತ, ರಾಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

