ಕೆರಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಎಸ್ಡಿಎಂಸಿ ರಚನೆ
ನಾಗಾವಿ ಎಕ್ಸಪ್ರೆಸ್
ಚಿಂಚೋಳಿ: ತಾಲೂಕಿನ ಕೆರಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಎಸ್ಡಿಎಂಸಿ ರಚನೆ ಮಾಡಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ ರೆಡ್ಡಿ, ಸದ್ಯಸ ಬಸವರಾಜ ರವರ ಸಮ್ಮುಖದಲ್ಲಿ ಶನಿವಾರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಎಸ್ಡಿಎಂಸಿ ಅಧ್ಯಕ್ಷರಾಗಿ ನಾಗೇಂದ್ರಪ್ಪ ಪೆಂಚಪಲ್ಲಿ, ಉಪಾಧ್ಯಕ್ಷರಾಗಿ ಕರಣ ಹುಳಗೇರಿ, ಸದಸ್ಯರಾಗಿ ಸಂಜು ರೆಡ್ಡಿ, ರಾಜು ದಸ್ತಾಪುರ, ಸಂಗೀತ ರೇವಣಸಿದ್ದಪ್ಪ, ಶಬ್ಬೀರ ಅಲಿ, ಸಿದ್ದಮ್ಮ ರಾಯಪ್ಪ, ರಮೇಶ ಹಾಗೂ ದಯಾನಂದ ಬೆನಕನಳ್ಳಿ, ಕಾರ್ಯದರ್ಶಿ ಮುಖ್ಯಗುರು ಶಿವಪುತ್ರ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ನಾಗೇಂದ್ರಪ್ಪ, ಪ್ರೀಯಂಕಾ, ಯಲ್ಲಾಲಿಂಗ, ಸವಿತಾ, ಸಂಗೀತಾ, ಶ್ರೀದೇವಿ ಮತ್ತು ಭೀಮಶಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

