ಚಿತ್ತಾಪುರ ಕೈಗಾರಿಕಾ ವಲಯಕ್ಕೆ ಕರ್ನಾಟಕ ಕೈಗಾರಿಕಾ ನೀತಿಯ ಹಿಂದುಳಿದ ಪ್ರದೇಶ ಅನುದಾನಗಳು ಮತ್ತು ಸಹಾಯಧನಗಳನ್ನು ವಿಸ್ತರಿಸಲು ಮನವಿ: ಚಿಸ್ತಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬೆಂಗಳೂರಿನಲ್ಲಿ ನಡೆದ ಕಾಸಿಯಾ (KASSIA) ಅವರ ಮಾಸಿಕ ಸಭೆಯಲ್ಲಿ ಭಾಗವಹಿಸಿ, ಚಿತ್ತಾಪುರ ಹೊಸ 27 ಎಕರೆ ಕೈಗಾರಿಕಾ ವಲಯಕ್ಕೆ ಕರ್ನಾಟಕ ಕೈಗಾರಿಕಾ ನೀತಿಯ ಹಿಂದುಳಿದ ಪ್ರದೇಶ ಅನುದಾನಗಳು ಮತ್ತು ಸಹಾಯಧನಗಳನ್ನು ವಿಸ್ತರಿಸಲು ಮಹತ್ವದ ವಿಷಯವನ್ನು ಪ್ರಸ್ತಾಪಿಸಿ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಸಿಟಿಎಸ್ಎಸ್ಐಎ ಅಧ್ಯಕ್ಷ ಹಾಗೂ ಕಾಸಿಯಾ (KASSIA) ವಿಶೇಷ ಆಹ್ವಾನಿತ ಸಯ್ಯದ್ ನಿಜಾಮುದ್ದೀನ್ ಚಿಸ್ತಿ ತಿಳಿಸಿದ್ದಾರೆ.
ಇದರಿಂದ ಎಮ್ಎಸ್ಎಮ್ಇಗಳು ಮತ್ತು ಸ್ಟಾರ್ಟ್ಅಪ್ಗಳಿಗೆ ಕಡಿಮೆ ದರದಲ್ಲಿ ಹಾಗೂ ಸಹಾಯಧನದ ಆಧಾರದ ಮೇಲೆ ಕೈಗಾರಿಕಾ ಜಾಗಗಳು ದೊರೆಯುವ ಉದ್ದೇಶವಿದೆ. ಮತ್ತಷ್ಟು, ಈ ವಿಷಯವನ್ನು ಕೆಎಸ್ಎಸ್ಐಡಿಸಿ ಮಂಡಳಿಯ ಸಭೆ ಹಾಗೂ ಸಚಿವರ ವಿಚಾರಕ್ಕೆ ತರುವಂತೆ ಕಾಸಿಯಾ ಅವರಿಗೆ ವಿನಂತಿ ಪತ್ರವನ್ನೂ ಸಲ್ಲಿಸಿದ್ದೇನೆ.
ಚಿತ್ತಾಪುರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದ್ದು ಸ್ಥಳೀಯ ಜನರು ಕೈಗಾರಿಕೆಗಳನ್ನು ಪ್ರಾರಂಭಿಸಲು ಪ್ರೋತ್ಸಾಹ ನೀಡುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಹಾಗೂ ನಮ್ಮ ಪ್ರದೇಶದಲ್ಲಿ ಎಮ್ಎಸ್ಎಮ್ಇಗಳ ಬೆಳವಣಿಗೆಯನ್ನು ಬಲಪಡಿಸುವುದು ನನ್ನ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

