ಚಿತ್ತಾಪುರದಲ್ಲಿ ಶರಣ ಶ್ರೀ ಹೂಗಾರ ಮಾದಯ್ಯ ಜಯಂತಿ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ತಾಲೂಕು ಹೂಗಾರ ಸಮಾಜದ ವತಿಯಿಂದ ಭಾನುವಾರ ಶರಣ ಶ್ರೀ ಹೂಗಾರ ಮಾದಯ್ಯ ರವರ ಜಯಂತಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರಯುಕ್ತ ಗೌರವ ಡಾಕ್ಟರೇಟ್ ಪಡೆದ ಪಂಚಾಕ್ಷರಿ ಹೂಗಾರ ದಂಡಗುಂಡ ಹಾಗೂ ಅತ್ಯುತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಮಲ್ಲಿಕಾರ್ಜುನ ಹೂಗಾರ ಭೀಮನಹಳ್ಳಿ ರವರಿಗೆ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಶರಣಪ್ಪ ಹೂಗಾರ ಅಲ್ಲೂರ, ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ, ಹಿರಿಯರಾದ ಶಿವಣ್ಣ ಹೂಗಾರ ಅಳ್ಳೊಳ್ಳಿ, ಶಿವಶರಣಪ್ಪ ಹೂಗಾರ ಮೊಗಲಾ, ಪರತಪ್ಪ ಹೂಗಾರ ಮೊಗಲಾ, ಬಸವರಾಜ ಹೂಗಾರ, ಅಶೋಕ, ಚಂದ್ರಕಾಂತ, ಬಸವರಾಜ, ಸುರೇಶ ಹೂಗಾರ ಇಂಗಳಗಿ, ಸಿದ್ದಣ್ಣ ಲಾಡ್ಲಾಪೂರ, ಶಿವಧರ್ಮ, ಸಿಧ್ದರಾಜ ಹೂಗಾರ ಇನ್ನಿತರರು ಉಪಸ್ಥಿತರಿದ್ದರು.

