ಚಿತ್ತಾಪುರ ಜೆಡಿಎಸ್ ಸೇವಾದಳದ ತಾಲೂಕು ಅಧ್ಯಕ್ಷರಾಗಿ ಸತೀಶ್ ಕಬಾಡೆ ನೇಮಕ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲಬುರಗಿ ಜಿಲ್ಲಾ ಜನತಾದಳ ಜಾತ್ಯಾತೀತ ಪಕ್ಷದ ಜಿಲ್ಲಾ ಅಧ್ಯಕ್ಷ ಬಾಲರಾಜ್ ಅಶೋಕ ಗುತ್ತೇದಾರ ರವರ ಶಿಫಾರಸ್ಸಿನ ಮೇರೆಗೆ ಹಾಗೂ ಕರ್ನಾಟಕ ರಾಜ್ಯ ಜಾತ್ಯಾತೀತ ಜನತಾ ದಳ ಸೇವಾ ದಳ ವಿಭಾಗದ ರಾಜ್ಯಾಧ್ಯಕ್ಷ ಬಸವರಾಜ ಪಾದಯಾತ್ರೆ ಅವರ ಆದೇಶದ ಮೇರೆಗೆ ಸತೀಶ್ ಶಟವಾಜಿ ಕಬಾಡೆ ರವರನ್ನು ಚಿತ್ತಾಪುರ ತಾಲೂಕು ಜಾತ್ಯಾತೀತ ಜನತಾ ದಳ ಸೇವಾದಳ ವಿಭಾಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಸೇವಾ ದಳ ಮಹಾನ್ ಪ್ರಧಾನ ಕಾರ್ಯದರ್ಶಿ ಹಾಗೂ ಕಲ್ಯಾಣ ಕರ್ನಾಟಕ ಉಸ್ತುವಾರಿ ವಲ್ಸಲ್ ಕುಮಾರ ಟಿ.ವಿ ತಿಳಿಸಿದ್ದಾರೆ.
ಈ ಕೂಡಲೆ ಗುರುತರವಾದ ಜವಾಬ್ದಾರಿಯನ್ನು ವಹಿಸಿಕೊಂಡು ಸೇವಾ ದಳದ ಸಂಘಟನೆ ಮಾಡಿ, ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದು ನೇಮಕಾತಿ ಪತ್ರದ ಮೂಲಕ ಆದೇಶಿಸಿದ್ದಾರೆ.

