ಮುಡಬೂಳ-ಶ್ರೀಶೈಲ್ ಪಾದಯಾತ್ರೆಗೆ ಚಾಲನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಮುಡಬೂಳ ಗ್ರಾಮದಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸುಕ್ಷೇತ್ರ ಶ್ರೀಶೈಲ್ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋಗುವ ಪಾದಯಾತ್ರೆಗೆ ಊರಿನ ಹಿರಿಯರು ಚಾಲನೆ ನೀಡಿ ಶುಭ ಹಾರೈಸಿದರು.
ಇದು 28 ನೇ ವರ್ಷದ ಪಾದಯಾತ್ರೆಯಾಗಿದ್ದು, ಭಕ್ತಾದಿಗಳು ಶ್ರದ್ಡಧಾಭಕ್ತಿಯಿಂದ ಪ್ರತಿ ವರ್ಷ ಭಾಗವಹಿಸುತ್ತಾರೆ ಎಂದು ಶರಣು ಸಿದ್ರಾಮಗೋಳ ತಿಳಿಸಿದ್ದಾರೆ.
ಪಾದಯಾತ್ರೆಯಲ್ಲಿ ಮಲ್ಲಯ್ಯ.ಮಠಪತಿ, ದೇವಪ್ಪ ಶಿದ್ರಮಗೋಳ, ಹಣಮಂತ ತೆಳಗೇರಿ, ಸಿದ್ದಪ್ಪ ಎಸ್.ಮ್ಯಾಗೇರಿ, ಮರೆಪ್ಪ ಅಪ್ಪೋಜಿ, ಈರಪ್ಪ ಪೂಜಾರಿ, ವಿಜಯಕುಮಾರ ತೆಳಗೇರಿ, ರಮೇಶ ಅಪ್ಪೋಜಿ ಶಂಕರ ಸಂಗಾವಿ, ಶಾಂತಪ್ಪ ಮ್ಯಾಗೇರಿ, ರವಿ ರಟಗಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

