ಸಚಿವ ಸಂತೋಷ್ ಲಾಡ್ ಹೇಳಿಕೆಗೆ ಹಡಪದ ಸಮಾಜ ಖಂಡನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಿಧಾನಸೌಧದ ಮುಂಭಾಗದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಕಾರ್ಮಿಕ ಇಲಾಖೆಯ ಸಚಿವ ಸಂತೋಷ್ ಲಾಡ್ ರವರು ಬಾರ್ಬರ್ ಅಂದರೆ ಹಜಾಮ್ ಎಂಬ ಸವಿತಾ ಸಮಾಜದ ನಿಷೇಧಿತ ಪದ ಬಳಸಿದ್ದು ಅಕ್ಷಮ್ಯ ಅಪರಾಧ ಎಂದು ಹಡಪದ ಸಮಾಜದ ನಗರಾಧ್ಯಕ್ಷ ಮುರುಳಿ ಹಡಪದ ಖಂಡಿಸಿದ್ದಾರೆ.
ನಿಷೇಧಿತ ಪದ ಬಳಕೆ ಮಾಡಿದ ಸಚಿವರು ಅಸಂಘಟಿತ ವಲಯದ ಕಾರ್ಮಿಕರಾದ ಕ್ಷೌರಿಕರಿಗೆ ಅವಮಾನಿಸಿದ್ದಾರೆ. ಜವಾಬ್ದಾರಿಯುತ ಸಚಿವರು ಶಾಸಕರುಗಳೆ ನಿಷೇಧಿತ ಪದ ಬಳಸಿ ಅನುಮಾನಿಸುತ್ತಿರುವುದು ಸರಿಯಲ್ಲ ತಕ್ಷಣ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

