ಚಿತ್ತಾಪುರ ತಹಸೀಲ್ ಕಚೇರಿಯಲ್ಲಿ ನೂಲಿಯ ಚಂದಯ್ಯ ಜಯಂತಿ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಪ್ರಜಾ ಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ಕೊರಮ ಸಮಾಜದ ಆರಾಧ್ಯ ದೈವ ಶ್ರೀ ನೂಲಿಯ ಚಂದಯ್ಯ ನವರ 918ನೇ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು.
ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್ ಭಾವಚಿತ್ರಕ್ಕೆ ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು. ಶಿರಸ್ತೇದಾರ್ ಅಶ್ವಥ್ ನಾರಾಯಣ, ವಿಠಲ್ ರಾವ್, ತಾಲೂಕು ಅಧ್ಯಕ್ಷ ಕಾಶಪ್ಪ ಭೈರಿ, ಜಿಲ್ಲಾ ಉಪಾಧ್ಯಕ್ಷ ಶಿವು ಭಜಂತ್ರಿ ಚಿತ್ತಾಪುರ, ಮಾಜಿ ಅಧ್ಯಕ್ಷ ಜಗದೀಶ ಜಾದವ ವಾಡಿ, ಮಾಜಿ ಗೌರವ ಅಧ್ಯಕ್ಷ ಮಲ್ಲು ಭಜಂತ್ರಿ ಹಲಕಟ್ಟಿ, ಶಾಂತಾಬಾಯಿ, ಮರೇಪ್ಪ ಭಜಂತ್ರಿ, ಮುರುಘೇಂದ್ರ ಭಜಂತ್ರಿ, ಶಿವುಕುಮಾರ ಭೈರಿ, ಶರಣಪ್ಪ ಭೈರಿ, ರಮೇಶ್ ಭಜಂತ್ರಿ, ರಾಮು ಭಜಂತ್ರಿ ಕೊಲ್ಲೂರು, ಕೃಷ್ಣ ದಿಗ್ಗಾಂವಿ ಸೇರಿದಂತೆ ಇತರರು ಇದ್ದರು.

