ಜಾತಿ ಜನಗಣತಿ ಕಾಲಂನಲ್ಲಿ ಕುರುಬ ಎಂದು ಬರೆಯಿಸಲು ಮಲ್ಲಿಕಾರ್ಜುನ ಪೂಜಾರಿ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಡಿ ಸೆ.22 ರಿಂದ ಪ್ರಾರಂಭವಾದ ಜಾತಿ ಜನಗಣತಿ ಕಾಲಂನಲ್ಲಿ ಕುರುಬ ಎಂದು ಬೆರೆಯಿಸಬೇಕು ಎಂದು ಕುರುಬ ಸಮಾಜದ ತಾಲೂಕು ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪೂಜಾರಿ ಮನವಿ ಮಾಡಿದ್ದಾರೆ
8 ನೇ ಕಾಲಂನಲ್ಲಿ ಧರ್ಮ ಹಿಂದೂ, 9 ನೇ ಕಾಲಂನಲ್ಲಿ ಜಾತಿ ಕುರುಬ, 10 ನೇ ಉಪಜಾತಿ ಇಲ್ಲ ಹಾಗೂ 11 ನೇ ಕಾಲಂನಲ್ಲಿ ಪರ್ಯಾಯ ಪದ ಸಮಾನಾರ್ಥಕ ಜಾತಿ ಗೊಂಡ ಎಂದು ನಮೂದಿಸಬೇಕು ಎಂದು ಕೋರಿದ್ದಾರೆ. ಯಾವುದೇ ಗೊಂದಲಕ್ಕೆ ಒಳಗಾಗದೆ ಗಣತಿದಾರರು ಮನೆಗೆ ಬಂದಾಗ ಎಲ್ಲರೂ ಕುರುಬ ಎಂತಲೇ ಬರೆಯಿಸಿ ಖಾತ್ರಿ ಮಾಡಿಕೊಳ್ಳಬೇಕು ಎಂದು ಕೋರಿದ್ದಾರೆ.
