Oplus_0

ಪ್ರಣವಾನಂದ ಶ್ರೀಗಳ 700 ಕೀ.ಮೀ ಪಾದಯಾತ್ರೆ, ರಾಯಚೂರು ಜಿಲ್ಲೆಗೆ ಪ್ರವೇಶ | 18 ಬೇಡಿಕೆಗಳ ಈಡೇರಿಕೆಗೆ ಒತ್ತಾಯ ಸರ್ಕಾರದ ಸ್ಪಂದನೆಗೆ ಶ್ರೀಗಳ ಆಗ್ರಹ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ 18 ಬೇಡಿಕೆಗಳನ್ನು ಒತ್ತಾಯಿಸಿ ಪ್ರಣವಾನಂದ ಶ್ರೀಗಳು ನಡೆಸುವ ಪಾದಯಾತ್ರೆ ಕಲಬುರಗಿ, ಯಾದಗಿರಿ ಜಿಲ್ಲೆ ದಾಟಿ ರಾಯಚೂರ ಪ್ರವೇಶ ಮಾಡಿದೆ.

ಜ.6 ರಂದು ಚಿತ್ತಾಪುರದ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಪ್ರಾರಂಭಗೊಂಡ ಪಾದಯಾತ್ರೆ ಚಿತಾಪುರ, ರಾವೂರ, ಶಹಾಬಾದ್, ಜೇವರ್ಗಿ, ಅಂದೋಲ, ಚಿಕ್ಕಮುಡಬಾಳ, ಅಳ್ಳಳ್ಳಿ, ಶಹಾಪುರ ರಸ್ತಾಪುರ ಕ್ರಾಸ್ ಬಿರ್ನೂರು ದಾರಿಯಾಗಿ ಸಿರವಾರ ಕ್ರಾಸ್ ಗೆ ಸೋಮವಾರ ತಲುಪಲಿದೆ. ಡಾ ಪ್ರಣವಾನಂದ ಶ್ರೀಗಳ ಜೊತೆಗೆ 130 ಕಿ.ಮೀ ಅಧಿಕ ದೂರ ಭಕ್ತರು ಪಾದಯಾತ್ರೆ ಮಾಡಿದರು. 13ನೇ ತಾರೀಕಿಗೆ ಮಂಗಳವಾರ ಶಿರವಾರ ಕ್ರಾಸ್ ದೇವದುರ್ಗದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ ಮತ್ತು ಮುಂದಿನ ಪ್ರವಾಸಕ್ಕೆ ಸಿದ್ಧತೆ ನಡೆಯಲಿದೆ.

ನಂತರ ಜ.14ರಂದು ಬುಧವಾರ 20 ಕಿ.ಮೀ ದೂರ ಸಾಗಿ ಶಿರವಾರ ಕ್ರಾಸ್ , ಕೊತ್ತದೊಡ್ಡಿಯಾಗಿ ಜೂಟಮರಡಿಯಲ್ಲಿ ವಾಸ್ತವ್ಯ ಹೂಡಲಾಗುವುದು. ಸಿರವಾರ ಕ್ರಾಸ್ 20 ಕಿಲೋ ಮೀಟರ್ ದೂರ ಪಾದಯಾತ್ರೆಯಲ್ಲಿ ಲಿಂಗಸುಗೂರು ತಾಲೂಕು, ಮಸ್ಕಿ ತಾಲೂಕು ಸಿರಿವಾರ ದೇವದುರ್ಗ ತಾಲೂಕು ಮಧ್ಯದಲ್ಲಿ ಬರುವ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಹಾಗೂ ಸಿರವಾರ ಕ್ರಾಸನಿಂದ ಜೂಟ್ ಮರಡಿವರೆಗೆ 20 ಕಿಲೋಮೀಟರ್ ದೂರ ಪಾದಯಾತ್ರೆಯಲ್ಲಿ ದೇವದುರ್ಗ ತಾಲೂಕು ಸಿರವಾರ ಗುರುಮಿಟ್ಕಲ್ ತಾಲೂಕ್ ಮಧ್ಯದಲ್ಲಿ ಬರುವ ಸ್ಥಳಗಳ ಸಮಾಜ ಬಾಂಧವರು ಪಾಲ್ಗೊಳ್ಳುವಂತೆ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಡಿಗರ ಹೋರಾಟದ ಕಿಚ್ಚು ಮೂರು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಬ್ಬಿದ್ದು ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿದೆ. ಸಮಾಜವನ್ನು ಸರ್ಕಾರ ಕಡೆಗಣಿಸದೆ ನ್ಯಾಯೋಚಿತ ಬೇಡಿಕೆಗಳಿಗೆ ಸ್ಪಂದನ ನೀಡಬೇಕು ಎಂದು ಡಾ. ಪ್ರಣವಾನಂದ ಶ್ರೀಗಳು ಒತ್ತಾಯಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!