ಮಹಾನಂದಿ ಶಿಲಾಮೂರ್ತಿ ಪ್ರತಿಷ್ಠಾಪನೆ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಶಾಂತಕುಮಾರ್ ಹತ್ತಿ ಅವರಿಗೆ ಕಂಬಳೇಶ್ವರ ಶ್ರೀಗಳಿಂದ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ನಾಗಾವಿ ಗೋ ಶಾಲೆಯ ಹತ್ತಿರದ ಶ್ರೀ ಮಹಾನಂದಿ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ ಸಮಿತಿಯ ನೂತನ ಅಧ್ಯಕ್ಷರಾಗಿ ಉದ್ಯಮಿ ಶಾಂತಕುಮಾರ್ ಹತ್ತಿ ಅವರು ಆಯ್ಕೆಯಾಗಿದ್ದಾರೆ.
ಕಂಬಳೇಶ್ವರ ಮಠದಲ್ಲಿ ಶನಿವಾರ ನೂತನ ಅಧ್ಯಕ್ಷ ಶಾಂತಕುಮಾರ್ ಹತ್ತಿ ಅವರನ್ನು ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯರು ಸನ್ಮಾನಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ್ ಭಂಕಲಗಿ, ಅನಿಲಕುಮಾರ ವಡ್ಡಡಗಿ, ಮಲ್ಲಿಕಾರ್ಜುನ್ ರೆಡ್ಡಿ ಇಜಾರ್, ಚಂದ್ರಶೇಖರ್ ಉಟಗೋರ್, ರಮೇಶ್ ಬೊಮ್ಮನಳ್ಳಿ, ಸಂತೋಷ್ ಹಾವೇರಿ, ಬಸವರಾಜ ಸಂಕನೂರ್, ಬಸವರಾಜ ಕಾಳಗಿ, ಮಲ್ಲಿಕಾರ್ಜುನ್ ಪೂಜಾರಿ, ಅಂಬರೀಶ್ ಸುಲೇಗಾಂವ್, ಶ್ರೀನಿವಾಸ ರೆಡ್ಡಿ ಸುವನ್ ರೆಡ್ಡಿ, ಸೂರ್ಯಕಾಂತ್, ವೀರಭದ್ರಪ್ಪ ಗುರುಮಿಟ್ಕಲ್, ರವಿ ಗೊಬ್ಬುರ್, ಶಿವಾನಂದ್ ಭಂಗಿ, ರಾಚಣ್ಣ ಬೊಮ್ಮನಳ್ಳಿ, ಸಂಗಮೇಶ ರೋಣದ, ಮಂಜು ಶಾಸ್ತ್ರಿ ಸೇರಿದಂತೆ ಇತರರು ಇದ್ದರು.

